ಎಚ್ಚೆಮ್, ಪೆರ್ನಾಳ್

ಎಚ್ಚೆಮ್ ಪೆರ್ನಾಳ್ ಹ್ಯಾ ಲಿಕ್ಣೆನಾಂವಾನ್ ಕೊಂಕ್ಣಿ ಸಾಹಿತ್ಯ್ ಸಂಸಾರಾಂತ್ ಒಳ್ಕೆಚೊ ಹೆನ್ರಿ ಮೆಂಡೋನ್ಸಾ, ಗಾಂವಾನ್ ಪೆರ್ನಾಳ್ಚೊ. ಪ್ರಸ್ತುತ್ ಕೊಂಕ್ಣಿ ಸಾಹಿತ್ಯ್ ಆನಿ ಸಮಾಜೆಕ್ ಸಮರ್ಪಿತ್ ಜಾಳಿಸುವಾತ್ ಕಿಟಾಳ್ ತಶೆಂ ಆರ್ಸೊ ಪಂದ್ರಾಳೆಂ ಪತ್ರಾಚೊ ಸಂಪಾದಕ್. ಚಲ್ಯಾಂಕ್ ಚತ್ರಾಯ್(1999), ಕಯ್ದ್ಯಾಚೊ ಕವಿತಾ(2004), ಭಾಮುಣಾಂಚೆಂ ಚೆಡುಂ(2006) - ತಾಚೆ ಪ್ರಕಟಿತ್ ಕವಿತಾ ಜಮೆ. ದೆವಾಕ್ ಸೊಡ್ಲ್ಲೊ ಪಾಡೊ(2002), ಬೀಗ್ ಆನಿ ಬಿಗಾತ್ (2016) - ಮಟ್ವ್ಯಾ ಕಾಣಿಯಾಂ ಸಂಗ್ರಹ್. ಕೊಂಕ್ಣೆ ಶಿವಾಯ್ ಕನ್ನಡ್, ಇಂಗ್ಲಿಷ್ ಭಾಸಾಂನೀಯ್ ತೋ ಬರಯ್ತಾ.
Recent Archives
- ದೋನ್ ಶಿಂಗಾಂ - ಏಕ್ ಭರ್ವಸೊ; ಏಕ್ ವಾಟ್...
- ದಸೆಂಬರ್ 17 ವೆರ್ ಆರ್ಸೊ - ಪೊಯೆಟಿಕ್ಸ್ ಕಾರ್ಯೆಂ
- ಮ್ಹಜೆ ದೇವ್
- ಅಕಾಡೆಮಿಂತ್ ಸ್ತ್ರೀ ಸಾಹಿತಿಕ್ ಅಕ್ಮಾನ್, ಜವಾಬ್ದಾರ್ ಕೋಣ್?
- ಮೊಗಾಉಜ್ಯಾಂತ್ ಲಾಸ್ಲ್ಲೆಂ ಫುಲ್ - ಸಾಂ.ಅಲ್ಫೊನ್ಸಾ
- ಎಕಾ ಇಶ್ಟಿಣಿಚೆಂ ರುಪ್ಣೆಂ
- ಪಾಟ್ಲ್ಯಾ ಸ ವರ್ಸಾಂನಿ ಕಿಟಾಳ್ ’ಸ್ಪಶ್ಟ್’ ಉಲಯ್ಲಾಂ
- ಆಮ್ಚೊ ಪಾದ್ರ್ಯಾಬ್ : ಸರ್ಗಿಂ ಪಯ್ಣಾಕ್ 20 ವರ್ಸಾಂ
- ಮಾವ್ನ್ ಆಸಾಂ, ಮರೊಂಕ್ ನಾ
- ಶಿಕ್ಪಾಚೊ ವೆಪಾರ್, ಶಿಕ್ಶಕಾಂಚೊ ವಯ್ವಾಟ್ ಆನಿ ವಿದ್ಯಾರ್ಥಿಂಚೊ ಆಕ್ರೋಶ್
- ಲಿಯೊ ರೊಡ್ರಿಗಸ್ ಕುಟಮ್ ಯುವ ಪುರಸ್ಕಾರ್ ಪ್ರದಾನ್ ಕಾರ್ಯೆಂ, ಡೊ| ಜಿ. ಜಿ. ಲಕ್ಷ್ಮಣ ಪ್ರಭು ಉಪನ್ಯಾಸ್
- ಪಾವ್ ಶೆರ್ ಜಿಂದಗೀ
- "ಆಮಿ ಗೊರ್ವಾಂ ಪೊಸ್ಚಿಂ ಆರ್ಬ್ಯಾಂಕ್ ಖಾವಂವ್ಕ್..." - ನಿ| ಮೈಕಲ್ ಎಫ್. ಸಲ್ಡಾನ್ಹಾ
- ಕೊಣಾಚ್ಯಾ ಖೊರ್ಜಿಕ್ ಕೊಣಾಕ್ ಇಂಜೆಕ್ಷನ್ ?
- ಕಾಜು ಬಿ, ಮಾಂಯ್ ಭಾಸ್ ಆನಿ ಸಂಸ್ಕೃತಿ
- ಬಣ್ಣ ಕಡ್ಡಿ - ಜೋನ್ ಬ್ಯಾಪ್ಟಿಸ್ಟ್ ಆನಿ ರೋಹಿತ್ ವೆಮುಲ
- ಜುದಾಸಾಚಿಂ ಸಂವೇದನಾಂ; ಜೆಜುಚೆರ್ ದುಬಾವ್ ?
- ಕಟೀಲಾಚಿ ಕವಿತಾ ಆನಿ ಕನ್ಹಯ್ಯಾಚೆ ವಿಚಾರ್
- ಸರ್ವಜಣಿಕ್ ಹಿತಾಸಕ್ತ್ ವಾ ಸ್ವ - ಹಿತಾಸಕ್ತ್ ?
- ಪೊಟಾಚೊ ಗ್ರಾಸ್ ಆನಿ ಆತ್ಮ್ಯಾಚೊ ಸಂತೊಸ್
- ಕೊಂಕ್ಣಿ ಸಿನೆಮಾಕ್ ಮ್ಯಾಜಿಕ್ ಟಚ್ - EAEN
- ನವಿ ತಾಂತ್ರಿಕತಾ, ನವೊ ವಿನ್ಯಾಸ್ , ವಾಚ್ಪ್ಯಾಂಲಾಗಿಂ ಏಕ್ ವಿನವ್ಣಿ
- ಸಬ್ ಕುಛ್ ಚಲ್ತಾ ಹೈ ?
- ಪ್ರೇಕ್ಷಕಾಕ್ ಕರಿನಾಕಾತ್ ನಜರಂದಾಜ್ !
- ಆಮ್ಚೊ ಬಿಸ್ಪ್ ಬ್ರ್ಯಾಂಡ್ ಅಂಬಾಸಿಡಾರ್ ?
- ಖುರ್ಸಾರ್ ಮೊರೊಂಕ್ ವೆಚೆಂ ಆದಿಂ
- ಪಾಂಚ್ವ್ಯಾ ವರ್ಸಾಚ್ಯಾ ಹುಂಬ್ರಾರ್ ಕಿಟಾಳ್ : ಥೊಡಿಂ ಭೊಗ್ಣಾಂ, ಥೊಡಿಂ ಸಪ್ಣಾಂ
- ಪ್ರಾಮಾಣಿಕತಾ, ಸಮಗ್ರತಾ ಆನಿ ಧಯ್ರ್
- ಲೊಕಾಚೊ ಗೊವ್ಳಿ : ವರ್ಸಾಚೊ ವೆಕ್ತಿ
- ಮುಕೆಲ್ಯಾಂಚ್ಯಾ ಪ್ರಚಾರ್ ಪಿಸಾಯೆಕ್ ಬಲಿ - ದುಬ್ಳೆ ಜೀವ್ ?
- ಚಿಕ್ಮಗ್ಳುರ್ಚೊ ಕೊಂಕ್ಣಿ ಲೋಕ್ : ದುಸ್ರ್ಯಾ ವರ್ಗಾಚೊ ?
- ಗಿಟಾರ್ ಆನಿ ರೆತಿರ್
- ಕರ್ನಾಟಕದಲ್ಲಿ ಕೊಂಕಣಿಗೆ ಬಲವಂತದ ’ಉದ್ಯಮಸ್ನಾನ?’
- ವಾವ್ರಾಚಿ ಆನಿ ರಿಣಾಚಿ ’ಫಟ್ಕಿರಿ’ ಕಾಣಿ
- ಮೆಲ್ಲ್ಯಾ ಮೊಶಿಕ್ ಬಾರಾ ಕುಟ್ಟಿಂ ದೂದ್ ?
- ಥೊಂಟ್ಯಾ ಕೊಂಕ್ಣೆಕ್ ಕನ್ನಡ ವಾಕರ್ ?
- ಕಿಟಾಳ್ ಚವ್ತ್ಯಾ ವರ್ಸಾಂತ್ ಪ್ರವೇಶ್ : ಏಕ್ ಉಪ್ಕಾರ್ ಆಟವ್ಣಿ
- ಸಮಾನ್ ಚಿಂತಪ್ ವಾ ಸಮಾನ್ ಆಸಕ್ತ್?
- ಯೆತಾ - ಕಿಟಾಳಾಚೆಂ ಕೊಂಕ್ಣಿ ಪತ್ರ್
- ಏಕ್ ಮೊಗಾಚೆಂ ಆಪವ್ಣೆಂ
- ಆಂಡ್ರ್ಯೂಚಾ ಕವಿತೆಂನಿ ರುಪಾಂ ಬದಲ್ಚೊ ವಾಗ್
- ಲಾಯಿಕ್ ನ್ಹಯ್ , ನಾಲಾಯೆಕ್ ತುಮಿ - ಫಾ. ವಿಲಿಯಂ ಮಾರ್ಟಿಸ್
- ಮುಳಾವೆಂ ಶಿಕ್ಷಣ್ ಇಂಗ್ಲಿಶಾಂತ್ ದಿಯಾ,ಪೂಣ್ ಸರ್ಕಾರಿ ಗ್ರ್ಯಾಂಟ್ ವಿಚಾರ್ನಾಕಾತ್ - ಮೀನಾ ಕಾಕೊಡ್ಕರ್
- ಕೊಂಕ್ಣೆಂತ್ ಗದ್ಯ್ ಸಾಹಿತ್ಯ್ ವಾಡ್ಟೇ ಆಸಾ - ದಾಮೋದರ್ ಮಾವ್ಜೊ.
- ಹಾಂವ್ ಏಕ್ ಕಾಣಿಯಾಂಗಾರ್ - ವಲ್ಲಿ ವಗ್ಗ
- ನವ್ಯಾಂಕ್ ಕೊಣೆಂ ಆಡಾಯ್ಲಾಂ? - ಜೊನ್ ಡಿ’ಸಿಲ್ವಾ
- ಹಾಂವ್ ತೃತೀಯ ಶಕ್ತಿ - ಚಿನ್ನಾ ಕಾಸರಗೋಡು
- ಬರಯಿಲ್ಲೆಂ ಆನಿ ಛಾಪ್ಯಾಕ್ ಘಾಲ್ಲೆಂ ಉರ್ತಾ - ಬಾ. ಸ್ಟೀವನ್ ಪಿರೆರ್
- ಭುರ್ಗ್ಯಾಂಚೆಂ ಸಾಹಿತ್ಯ್ ರಚ್ಚ್ಯಾಂತ್ ತೃಪ್ತಿ ಆಸಾ - ಜೆ.ಎಫ್.ಡಿಸೋಜಾ
- ನಾಯ್ಟಾಂತ್ ಗಾವ್ಪ್ಯಾಂಚೆಂ ಪ್ರಸಂಟೇಶನ್ ಮಹತ್ವಾಚೆಂ - ಸ್ಟ್ಯಾನಿ ಮೆಂಡೋನ್ಸಾ
- ಆನಿ ತರೀ ಉಜ್ವಾಡು ಫಾಂಕೊಂ
- ಹೆ ರಾಕ್ಣೆ - ಭಾಶೆಚೆ ? ಭಾವಾಡ್ತಾಚೆ ?
- ಕೊಂಕ್ಣೆ ವಿಶ್ಯಾಂತ್ ಇತ್ಲೆಂ ನೆಗೆಟಿವ್ ಉಲೊಣೆಂ ಕಿತ್ಯಾಕ್ ?
- ಕಾಳೊಕು , ಉಜ್ವಾಡು ಆನಿ ಅಂದ್ಕಾರು !
- ತಿಸ್ರ್ಯಾ ವರ್ಸಾಚ್ಯಾ ಹುಂಬ್ರಾರ್ . . .
- ಉಜ್ವಾಡು - ಅನಾಥ್ಪಣಾಚಿ ಕಾಣಿ !
- ಸರ್ದಾರ್ ಸಿಮಾಂವ್ - ರಿಚರ್ಡ್ ಸಿಕ್ವೇರಾ - ಆನಿ ನಾ.
- ತಬರ ಶೆಟ್ಟಿ , ಮುತ್ಸದ್ಧಿ ಲಾಲ್ ಆನಿ ಕೇಜ್ರಿವಾಲ್
- ಸತ್ ಆನಿ ಸತಾಚಿ ಪರೀಕ್ಷಾ
- ಮ್ಹಾಕಾ ಕಿತ್ಯಾಕ್ ಬರಂವ್ಕ್ ಜಾಯ್ನಾ ?
- ವಲ್ಲಿ ವಗ್ಗ - ಸ್ಪಶ್ಟ್ ದಿಶ್ಟಾವ್ಯಾಚೊ ಮನಿಸ್
- ಶಿಜೊನ್ ಆಸ್ಚೆಂ ಜಿವಿತ್ - ಕವಿತಾ.
- ಅಕಾಡೆಮಿಂತ್ಲೆಂ ಪೊಲಿಟಿಕ್ಸ್ . . . ವ್ಯಾಕ್ !
- ವರಸ್ ಜಾತಾನಾ. . .
- ಎಕಾ ಪೆಂಟೆಚಿ ಕಾಣಿ
- ಬೌ ಬೌ ಆನಿ ಡೌ ಡೌ - ಕನ್ಕ್ಲೂಷನ್
- ಪೆರ್ನಾಲ್ ಥಾವ್ನ್ ಕೆಂಜಾರ್ - ಉಡಾಸಾಂಚೊ ಪುರ್ಶಾ
- ನಿರ್ವಾರ್ಯಾಚೆಂ ಏಕ್ ವರಸ್
- ಏಕ್ ಪ್ರಾಮಾಣಿಕ್ ಪ್ರೇತನ್
ಕರ್ನಾಟಕದಲ್ಲಿ ಕೊಂಕಣಿಗೆ ಬಲವಂತದ ’ಉದ್ಯಮಸ್ನಾನ?’
ಕಾಲ್ಚ್ಯಾ ಉದಯವಾಣಿ ಪತ್ರಾರ್ ಬೆಂಗ್ಳುರ್ಚ್ಯಾ ವಸಂತ ಶೆಟ್ಟಿ ಮ್ಹಳ್ಳ್ಯಾನ್ ಆಪ್ಲ್ಯಾ ಅಂಕಣಾಂತ್ ಕೊಂಕ್ಣೆವಿಶ್ಯಾಂತ್ ವಾಸ್ತವ್ ಗಜಾಲ್ ಸಮ್ಜೊನ್ ಘೆನಾಸ್ತಾನಾ ಥೊಡ್ಯೊ ಗಜಾಲಿ ಬರಯ್ಲ್ಯಾತ್. ಹ್ಯಾ ಪತ್ರಾನ್ ಹಾಚ್ಯಾ ಅದಿಂಯೀ ಕೊಂಕ್ಣಿ ಭಾಸ್, ಸಾಹಿತ್ಯ್, ಸಂಸ್ಕೃತೆಕ್ ಲಗ್ತಿ ಜಾಯ್ತೆ ಸತ್ ನ್ಹಂಯ್ ಆಸ್ಚೆ ಗಜಾಲಿ ಫಾಯ್ಸ್ ಕೆಲ್ಯಾತ್ ಆನಿ ಚುಕಿ ಸಾರ್ಕೆಂ ಕರ್ನ್ ಹಾಂವೆ ಬರಯಿಲ್ಲಿಂ ಪತ್ರಾಂ ಘಾಲುಂಕ್ ನಾಂತ್. ಹೆಂ ಬರಪ್ ತಾಂಕಾ ಧಾಡ್ಲ್ಯಾರೀ ಫಾಯ್ಸ್ ಕರ್ತಿತ್ ಮ್ಹಳ್ಳಿ ಹಮಿದಾರಿ ಮ್ಹಾಕಾ ನಾ. ದೆಕುನ್ ಹೆಂ ಬರಪ್ ಬರಯ್ಣಾರಾಕ್ ಇ ಮೇಲಾರ್ ಧಾಡುನ್ ದಿಲಾಂ ಆನಿ ಹಾಂಗಾಸರ್ ತುಮ್ಕಾಂ ಆನಿ ಹೆರ್ ಕನ್ನಡಾಚಾ ವಾಚ್ಪ್ಯಾಂಕೀ ವಾಚುಂಕ್ ಸಲೀಸ್ ಜಾಂವ್ದಿ ಮ್ಹಳ್ಳ್ಯಾ ಇರಾದ್ಯಾನ್ ಕನ್ನಡಾಂತ್ ದಿತಾಂ. ಕೊಂಕ್ಣಿ ಭಾಸ್ ಆನಿ ಸಾಹಿತ್ಯಾಬಾಬ್ತಿನ್ ಹೆ ಮ್ಹಜೆ ಖಾಸ್ಗಿ ವಿಚಾರ್. ತುಮ್ಚೆ ವಿಚಾರ್ ಮ್ಹಜ್ಯಾ ವಿಚಾರಾಂಕ್ ತುಮಿ ಜೊಡುಂಕ್ ವಾ ವಿರೋದ್ ಕರುಂಕ್ ಉಗ್ತ್ಯಾಮನಾಚ್ಯಾ ಚರ್ಚೆಕ್ ಅವ್ಕಾಸ್ ಆಸಾ. ಖಾಸ್ಗಿ ಆರೋಪ್ ನಾಕಾತ್. ಚರ್ಚಾ ವಿಶಯಾಚೆರ್ ಆಸೊಂ.
ಪ್ರಿಯ ವಸಂತ ಶೆಟ್ಟಿ,
ನಮಸ್ಕಾರಗಳು. ಈ ಉತ್ತರವನ್ನು ನಾನು ನಿಮ್ಮ ಅಂಕಣ ಪ್ರಕಟವಾದ ಪತ್ರಿಕೆಯಲ್ಲೇ ಬರೆಯಬೇಕಿತ್ತು. ಆದರೆ ಆ ಪತ್ರಿಕೆ ನನ್ನ ಬರಹವನ್ನು ಪ್ರಕಟಿಸುತ್ತದೆಯೆಂಬ ಖಾತ್ರಿ ನನಗಿಲ್ಲವಾದುದರಿಂದ ಇಲ್ಲಿ ಬರೆಯುತ್ತಿರುವದಕ್ಕೂ ಮತ್ತು ಎಷ್ಟೋ ವರ್ಷಗಳ ನಂತರ ಕನ್ನಡ ಬರೆಯುತ್ತಿರುವ ಕಾರಣ ನನ್ನ ಕನ್ನಡ ಬರೆವಣಿಗೆಯಲ್ಲಿ ನ್ಯೂನತೆಗಳಿದ್ದರೆ ಅದ್ದಕ್ಕೂ ಕ್ಶಮೆಯಿರಲಿ. ಕಳೆದ ಸಲ ಉಜ್ವಾಡು ಎಂಬ ಕೊಂಕಣಿ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಂದಾಗ ನೀವು ಅಂಕಣ ಬರೆಯುತ್ತಿರುವ ಪತ್ರಿಕೆಯಲ್ಲಿ ಆ ಚಿತ್ರದ ನಿರ್ದೇಶಕರು ಉಜ್ವಾಡು 35 ವರ್ಷಗಳ ನಂತರ ಕೊಂಕಣಿಯಲ್ಲಿ ನಿರ್ಮಾಣವಾದ ಚಿತ್ರ ಎಂಬ ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆ ಸತ್ಯವಲ್ಲ ಮೂರ್ನಾಲ್ಕು ವರ್ಷಗಳ ಹಿಂದೆ ಕಾಜಾರ್ ಎಂಬ ಕೊಂಕಣಿ ಚಿತ್ರ ತೆರೆಕಂಡು ಅದಕ್ಕೂ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಂದಿತ್ತು ಎಂದು ಸಂಪಾದಕರಿಗೆ ಪತ್ರ ಬರೆದಿದ್ದೆ. ಅದನ್ನು ಅವರು ಪ್ರಕಟಿಸಲಿಲ್ಲ. ಆದುದರಿಂದ ಈ ಪತ್ರ ಪ್ರಕಟಿಸುತ್ತಾರೆ ಎಂಬ ಖಾತ್ರಿ ನನಗಿಲ್ಲ. ( ಆಗ ನಿಮ್ಮಿಂದ ಅಂಕಣ ಬರೆಯಿಸಿದ ಮಂದಿ ಸುಮ್ಮನಿದ್ದರು )
ನಿಮ್ಮ ಬರಹವನ್ನು ಓದಿ ನನಗೆ ಮೊತ್ತ ಮೊದಲು ಅನಿಸಿದ್ದು - ಅಯ್ಯೋ ! ಕೊಂಕಣಿಗೆ ಈ ಸ್ಥಿತಿ ಬರಬಾರದಿತ್ತು. ನನಗೆ ತಿಳಿದಿರುವ ಪ್ರಕಾರ ಮಾರ್ಚ್ 16 ರ ಸಮ್ಮೇಳನದಲ್ಲಿ ನೀವು ಪ್ರಮುಖ ಭಾಷಣಕಾರರು. ಕೊಂಕಣಿಯಲ್ಲಿ ಈ ವರೆಗೆ "ನಿಮಗೆ ಪ್ರಶಸ್ತಿ ಕೊಡುತ್ತೇವೆ, ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನೀವು ಒಂದಿಷ್ಟು ಜನ ತರುವ ಏರ್ಪಾಡು ಮಾಡಿ" ಎನ್ನುವ ಒಳಒಪ್ಪಂದಗಳು ನಡೆಯುತ್ತಿದ್ದವು ಎಂದು ಜನ ಮಾತಾಡಿಕೊಳ್ಳುತ್ತಿದ್ದರು ಇನ್ನು ಮುಂದೆ "ನಿಮಗೆ ಭಾಷಣ ಮಾಡಲು ಅವಕಾಶ ಕೊಡುತ್ತೇವೆ. ವೇದಿಕೆ ಕೊಡುತ್ತೇನೆ. ಪತ್ರಿಕೆಗಳಲ್ಲಿ ಬರೆದು ಗುಲ್ಲೆಬ್ಬಿಸಿ ಜನ ಬರುವ ಹಾಗೆ ಮಾಡಿ ಅಥವಾ ಅಂಕಣದಲ್ಲಿ ಆಹ್ವಾನಿಸಿ" ಎನ್ನುವ ವ್ಯವಹಾರಗಳು ಕುದುರಿಕೊಳ್ಳತೊಡಗಿವೆ ಎಂದು ಮಾತಾಡತೊಡಗಿದರೆ ಆಶ್ಚರ್ಯಪಡಬೇಕಿಲ್ಲವೇನೊ. ತನ್ನ ಸಂಪನ್ಮೂಲಗಳನ್ನು ಬಳಸಿ ಜನರನ್ನು ಒಟ್ಟುಗೂಡಿಸಲಾಗದೇ, ಸಂಪನ್ಮೂಲ ವ್ಯಕ್ತಿಗಳಿಂದಲೇ ಪ್ರಚಾರ ಮಾಡಿಸಿ ಜನರನ್ನು ಒಟ್ಟುಗೂಡಿಸುವ ಮಟ್ಟಕ್ಕೆ ಕೊಂಕಣಿ ಸಂಘೋಟನ್ಗಳು ಇಳಿದದ್ದು ಮತ್ತು ನಿಮ್ಮತಂಹ ಮೇಧಾವಿಗಳು ಈ ತಂತ್ರಕ್ಕೆ ಬಲಿಪಶುವಾದದ್ದು ಮೊದಲನೆಯ ದುರಂತವಾದರೆ, ನೀವು ಹೆಮ್ಮೆಯಿಂದ ಕನ್ನಡ ಮತ್ತು ಕರ್ನಾಟಕಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆಂದು ತೊಡೆತಟ್ಟಿ ಹೇಳುವ ಕೊಂಕಣಿರಿಗರಲ್ಲಿ ಒಬ್ಬನೂ ಸಂಘೋಟನ್ನವರಿಗೆ ಭಾಷಣಕ್ಕೆ ಸಿಗದೇ, ತುಳು ಭಾಷಿಕನನ್ನು ಹುಡುಕಿ ಹೋದದ್ದು ಎರಡನೇ ದುರಂತ.
ಇ ಪೇಪರ್ನಲ್ಲಿ ವಸಂತ ಶೆಟ್ಟಿ ಲೇಖನ ಓದಲು ಕ್ಲಿಕ್ ಮಾಡಿ
ನಿಮ್ಮ, ಕನ್ನಡ ಮತ್ತು ಕರ್ನಾಟಕದ ಬೆಳವಣಿಗೆಯಲ್ಲಿ ಕೊಂಕಣಿ ಭಾಷಿಕರ ಕೊಡುಗೆ ಗಣನೀಯವಾದದ್ದು ಎಂಬ ಅನಿಸಿಕೆ ಮೇಲ್ನೊಟಕ್ಕೆ ಸರಿಯೆಂದು ಕಂಡರೂ ತೀರಾ ಸಂಕುಚಿತವಾದದ್ದು. ಕೊಂಕಣಿ ಭಾಷಿಕರ ಕೊಡುಗೆಯನ್ನು ನೀವ್ಯಾಕೆ ಬರೇ ಕರ್ನಾಟಕ ಮತ್ತು ಕನ್ನಡಕ್ಕೆ ಮಾತ್ರ ಸೀಮಿತ ಮಾಡಬೇಕು ? ಗುಜರಾತಿನಿಂದ ಕೇರಳದವರೆಗೆ ಹಬ್ಬಿದ ಭಾಷೆಯನ್ನು ಕರ್ನಾಟಕಕ್ಕಷ್ಟೇ ಸೀಮಿತ ಮಾಡಿ ಬರೆದಿರುವ ನಿಮ್ಮ ಸಂಕುಚಿತ ಮನೋಭಾವದ ಬಗ್ಗೆ ನನಗೆ ತೀರಾ ಕನಿಕರವಿದೆ. ನೀವು ಲೇವಡಿ ಮಾಡುತ್ತಿರುವ ಹಿಂದಿಗೆ ಕೊಂಕಣಿ ಭಾಷಿಕರ ಕೊಡುಗೆ ಏನು ಕಡಿಮೆಯೆ? ಶ್ಯಾಂ ಬೆನಗಲ್ರಂತಹ ಪ್ರತಿಭಾಶಾಲಿ ನಿರ್ದೇಶಕರು ಕೊಂಕಣಿ ಭಾಷಿಕರು. ಐಸಿಐಸಿಐ ಬ್ಯಾಂಕಿನ ಕೆ.ವಿ. ಕಾಮತ್ ಕೊಂಕಣಿ ಭಾಷಿಕರು. ಹಿರಿಯ ಪತ್ರಕರ್ತ ಎಮ್. ವಿ. ಕಾಮತ್ ಕೊಂಕಣಿ ಭಾಷಿಕರು. ಎನ್ಕಾಂವ್ಟರ್ ಸ್ಪೆಶಲಿಶ್ಟ್ ದಯಾ ನಾಯಕ್ ಕೊಂಕಣಿ ಭಾಷಿಕರು. ಹೀಗೆ ಎಷ್ಟೋ ಉದಾಹರಣೆಗಳನ್ನು ನಾನು ಇಲ್ಲಿ ಕೊಡಬಹುದು. ಹಿಂದಿ ಭಾಷೆಯಲ್ಲಿ ಮಿಂಚಿದ ಕೊಂಕಣಿ ಭಾಷಿಕರ ಕೊಡುಗೆ ಯಾವ ಮಟ್ಟದ್ದು ಎಂಬುದನ್ನು ಅರಿತುಕೊಳ್ಳಬೇಕಾದರೆ - ಬೇರೆ ಯಾರನ್ನೂ ಬೇಡ - ಯಾರ ಮುಂದಾಳುತ್ವದ ಸಮ್ಮೇಳನದಲ್ಲಿ ನೀವು ನಾಳೆ ಭಾಷಣ ಮಾಡಲಿರುವಿರೋ ಅವರನ್ನೇ ಒಮ್ಮೆ ಕೇಳಿ ನೋಡಿ. ಅವರು ಶ್ಯಾಂ ಬೆನಗಲ್ ಅವರನ್ನು ಮಂಗಳೂರಿಗೆ ಕರೆಸಿ, ವೇದಿಕೆ ನೀಡಿ, ಅವರಿಂದ ಕೊಂಕಣಿ ಏಕ್ ಖೋಜ್ ಎಂಬ ಸಿನೇಮಾವನ್ನು ಮಾಡುತ್ತಿದ್ದಾರೆ. ನೀವು ಇದನ್ನೂ ಬಲವಂತದ ಹಿಂದಿ ಹೇರಿಕೆಯೆನ್ನುತ್ತೀರಾ ?
ಗುಜರಾತಿನಿಂದ ಕೇರಳದವರೆಗೆ ಹಬ್ಬಿದೆಯೆನ್ನುವ ಒಂದು ಭಾಷೆಯ ಸಮಗ್ರ ಅಧ್ಯಯನವನ್ನು ಮಾಡದೇ ಯಾವುದೋ ಮೊನ್ನೆ ಮೊನ್ನೆ ಹುಟ್ಟಿದ ಸಂಘೋಟನ್ನವರು ಹೇಳಿದರೆಂದು ಪತ್ರಿಕೆಯಲ್ಲಿ ಅಂಕಣ ಬರೆಯುವುದು ನೀವು ಅಂಕಣ ಬರಹವನ್ನು ಎಷ್ಟು ಗಂಬೀರವಾಗಿ ಪರಿಗಣಿಸಿದ್ದೀರಿ ಮತ್ತು ಬರೆಯುವ ಮುಂಚೆ ಆ ವಿಷಯದ ಬಗ್ಗೆ ನೀವೆಷ್ಟು ಮನೆಗೆಲಸ ಮಾಡುತ್ತೀರಿ ಎಂಬುದನ್ನು ತೋರಿಸುತ್ತದೆ. ಹೇಳಿಕೆ ಕೊಡುವವರು ತಮ್ಮ ಲಾಭಕ್ಕೆ ಏನೇ ಹೇಳಿಕೆ ಕೊಡಬಹುದು, ಅದರ ಸತ್ಯಾಸತ್ಯತೆಯನ್ನು ಅರಿಯಲು ವಿಷಯದ ಎಲ್ಲಾ ಮಗ್ಗುಲುಗಳನ್ನು ಪರಾಮರ್ಶಿಸಿ ನೋಡಬೇಕಾದ್ದು ಅಂಕಣಕಾರನ ಜವಾಬ್ದಾರಿ ಎಂದು ನನ್ನ ತಿಳುವಳಿಕೆ.
ಒಂದು ಭಾಷೆ ಬರೀ ಸಾಹಿತ್ಯ ಅಕಾಡೆಮಿ ಕೊಡುವ ಪುರಸ್ಕಾರಗಳಿಂದ ಮಾತ್ರ ಬೆಳೆಯಬಲ್ಲುದು ಎಂಬುದರ ಬಗ್ಗೆ ನನಗೆ ನನ್ನದೇ ಆದ ಗುಮಾನಿಗಳಿವೆ. ಕರ್ನಾಟಕದ ಕೊಂಕಣಿ ಸಾಹಿತ್ಯಕ್ಕೆ ಹೆಚ್ಚು ಕಮ್ಮಿ ನೂರು ವರ್ಷಗಳ ಇತಿಹಾಸ. ಕೊಂಕಣಿಯ ಮೊದಲ ಪತ್ರಿಕೆ ಬಂದದ್ದು 1912. ಪುಸ್ತಕ ರೂಪದಲ್ಲಿ ಕೊಂಕಣಿ ಭಾಷೆಯಲ್ಲಿ ಪ್ರಕಟವಾದ ಸಾಹಿತ್ಯ ಮೊದಲಿನ 50 ವರ್ಷಗಳಲ್ಲಿ ವಿರಳವೆನ್ನಬಹುದು. ಆದರೆ ಇತ್ತೀಚೆಗೆ ಸಾಕಷ್ಟು ಪುಸ್ತಕಗಳು ಪ್ರಕಟವಾಗುತ್ತಿವೆ. ಕಾರ್ಯಕ್ರಮಗಳೂ ನಡೆಯುತ್ತಿವೆ. ಇಷ್ಟು ವರ್ಷಗಳಲ್ಲಿ ಕೊಂಕಣಿ ಭಾಷೆ ಅಕಾಡೆಮಿಯ ಪುರಸ್ಕಾರಗಳಿಲ್ಲದೇ ಬೆಳೆದದ್ದು ಹೌದಾದರೆ ಈಗ ಒಮ್ಮಿಂದೊಮ್ಮೆಲೆ ಈ ಪುರಸ್ಕಾರದ ವಿಷಯ ಕೊಂಕಣಿಯಲ್ಲಿ ಯಾಕೆ ಯುದ್ದದ ವಿಷಯವಾಯಿತು ? ಒಬ್ಬ ವ್ಯಕ್ತಿ ಮತ್ತವನ ಬಣ ಮಾತ್ರ ಯಾಕೆ ಈ ಯುದ್ದದಲ್ಲಿದೆ ? ನನ್ನಂತಹ ಕೊಂಕಣಿ ಬರಹಗಾರರಿಗೆ ಯಾಕೆ ಇದು ನಗಣ್ಯ ವಿಷಯವಾಗಿದೆ ? ಇವತ್ತು ಹಿಂದಿಯನ್ನು ವಿರೋಧಿಸುವವರು ಈಗ್ಗೆ ಕೆಲವರ್ಷಗಳ ಹಿಂದೆ ಒಂದಲ್ಲ ಎರಡೆರಡು ಪುಸ್ತಕಗಳನ್ನು ಹಿಂದಿಯಲ್ಲಿ ಮಾತ್ರ ಯಾಕೆ ಪ್ರಕಟಿಸಿದರು? ಕೋರ್ಟಿನಲ್ಲಿ ಕೇಸು ಹಾಕಿದವರು ಕೇಸು ಹಾಕಿದ ನಂತರವೂ ತಮ್ಮ ಪುಸ್ತಕಗಳನ್ನು ಯಾಕೆ ಹಿಂದಿಯಲ್ಲಿ ಪ್ರಕಟ ಮಾಡುತ್ತಾರೆ ? ಹೇಳುವುದು ವೇದ - ಇಕ್ಕುವುದು ಗಾಳ ಯಾಕೆ ? ಯಾಕೆ ಈ ದ್ವಂದ್ವ ನೀತಿ ? ಕನ್ನಡ ಲಿಪಿಯ ಕೊಂಕಣಿ ಸಾಹಿತ್ಯಕ್ಕೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬೇಕೆನ್ನುವ ಇವರು ಈವರೆಗೆ ಏನು ಬರೆದಿದ್ದಾರೆ ? ಈ ಬಗ್ಗೆ ಒಬ್ಬ ಜವಾಬ್ದಾರಿಯುತ ಬರಹಗಾರರಾಗಿ ನೀವು ಬರೆಯುವ ಮುನ್ನ ಮಾಹಿತಿ ಸಂಗ್ರಹಿಸಬೇಕಿತ್ತು.
ಇದು ಭಾರತದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಹಿಂದಿ ಹೇರಿಕೆಯ ಮುಂದುವರೆದ ಭಾಗವೇ ಆಗಿದೆ ಎಂದು ಕರ್ನಾಟಕದ ಮತ್ತು ಕೇರಳ ಕೊಂಕಣಿ ಭಾಷಿಕರ ಅಭಿಪ್ರಾಯ ಎಂದು ಬರೆದಿರುವ ನೀವು ಕರ್ನಾಟಕದ ಮತ್ತು ಕೇರಳದ ಎಷ್ಟು ಕೊಂಕಣಿ ಭಾಷಿಕರ ಅಭಿಪ್ರಾಯ ಸಂಗ್ರಹಿಸಿದ್ದೀರಿ ? ಕೇರಳದಲ್ಲಿ ಇರುವ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಭಿಪ್ರಾಯವನ್ನು ಪಡೆದಿದ್ದೀರಾ ? ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ ಒಬ್ಬ ಅಂಕಣಾಕಾರ ತನಗೆ ತೋಚಿದ್ದನ್ನೆಲ್ಲ ಬರೆಯುವುದು ಒಬ್ಬ ಬರಹಗಾರನ ಪ್ರಬುದ್ದತೆಯ ಲಕ್ಷಣವಲ್ಲ ಎಂಬುದು ನನ್ನ ನಮೃ ಅನಿಸಿಕೆ. ನಿಮಗೆ ನ್ಯಾಯಲಯದ ತೀರ್ಪಿನ ಮೇಲೆ ವಿಶ್ವಾಸವಿಲ್ಲವಾದರೆ ಯಾಕೆ ಕೇಸು ಹಾಕಬೇಕು?
ಮುಗಿಸುವ ಮುನ್ನ ,
ಇದು ಸಹಜವೋ, ಕಾಕತಾಳಿಯವೋ ಅರಿಯೆ. ಆದರೆ ನೀವು ಬರಹವನ್ನು ಕನ್ನಡ ಮತ್ತು ಕರ್ನಾಟಕದ ಬೆಳವಣಿಗೆಗೆ ಕೊಂಕಣಿ ಭಾಷಿಕರ ಕೊಡುಗೆಯಿಂದ ಆರಂಭಿಸಿದ ರೀತಿ ಮಾತ್ರ ಅನನ್ಯವಾದದ್ದು. ಹೌದು ವಸಂತ್ , ಒಂದು ಕಾಲವಿತ್ತು - ಬ್ಯಾಂಕಿಂಗ್, ಸಾಪ್ಟ್ವೇರ್, ವೈದ್ಯಕೀಯ ರಂಗ, ಶಿಕ್ಷಣ ಸಂಸ್ಥೆಗಳು, ಪತ್ರಿಕೋದ್ಯಮ ಮುಂತಾದ ಉದ್ಯಮಗಳಿಗೆ ಕೊಡುಗೆ ನೀಡಿದವರು ಕೊಂಕಣಿ ಭಾಷಿಕರು ಎಂದು ನಾವು ಬಹಳ ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುತ್ತಿದ್ದೆವು. ನನಗೆ ಚೆನ್ನಾಗಿ ನೆನಪಿದೆ, ಈಗ್ಗೆ 25 - 30 ವರ್ಷಗಳ ಹಿಂದೆ ಚಾ. ಫ್ರಾ. ದೆಕೊಸ್ತಾ, ಡೊ| ವಿಲ್ಲಿ ಆರ್. ಡಿಸಿಲ್ವ, ಮೆಲ್ವಿನ್ ರೊಡ್ರಿಗಸ್ ರಂತಹ ವಿದ್ವಾಂಸರು, ಕವಿಗಳು ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕಾಗಿ ತಮ್ಮದೆಲ್ಲವನ್ನೂ ಧಾರೆಯೆರೆದು ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಏಳಿಗೆಗಾಗಿ ಶ್ರಮಿಸಿದರು. ಸಂಘಟನೆಗಳನ್ನು ಕಟ್ಟಿದರು , ಬೆಳೆಸಿದರು. ಆಗ ನನ್ನಂತಹ ಸಾಕಷ್ಟು ಯುವಕರು ಇವರ ಗರಡಿಗಳಲ್ಲಿ ಪಳಗಿ ಬರಹಗಾರರಾದೆವು. ಆದರೆ ಇಂದಿನ ಪರಿಸ್ಥಿತಿಯೇನು ಗೊತ್ತೇ - ಕೊಂಕಣಿ ಎನ್ನುವುದೇ ಶತ ಕೋಟಿ ರೂಪಾಯಿಗಳ ಉದ್ಯಮವಾಗಿ ಪರಿವರ್ತನೆಗೊಂಡಿದೆ. ಕೊಂಕಣಿಯ ಹೆಸರಿನಲ್ಲಿ ತಲೆಯೆತ್ತಿ ನಿಂತಿರುವ ಸಂಘಟನೆಗಳಲ್ಲಿ ಒಬ್ಬನೇ ಒಬ್ಬ ಬರಹಗಾರ - ಸಾಹಿತಿ ಪಧಾದಿಕಾರಿಯಿಲ್ಲ. ಇದ್ದರೂ ನಾಮ್ ಕೆ ವಾಸ್ತೆ. ಉಳಿದಂತೆ - ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್ಗಳು, ಟೂರ್ ಒಪರೇಟರ್ಗಳು, ಎಲೆಕ್ಟ್ರಿಕಲ್ ಕಾಂಟ್ರಾಕ್ಟಾರ್ಗಳು, ಲೈಟ್ - ಸಾಂವ್ಡ್ ಒಪರೇಟರ್ಗಳು, ಕೇಟರರ್ಗಳು ಹೀಗೆ ಉದ್ಯಮಿಗಳೇ ಸಂಘಟನೆಯ ಪದಾದಿಕಾರಿಗಳು. ಪ್ರಾಮಾಣಿಕ ಬರಹಗಾರರು ಈ ಉದ್ಯಮಿಗಳ ಆರ್ಭಟಕ್ಕೆ ಹೇಸಿಕೊಂಡು ಮಾರುದ್ದ ನಿಂತಿದ್ದಾರೆ. ಕಾರ್ಯಕ್ರಮಗಳಿಗೆ ಹೊಗೋದಿಲ್ಲ. ಉದ್ಯಮಿಗಳು ಮ್ಯೂಸಿಕಲ್ ಚೇರ್ನಂತೆ ವರ್ಷ ಎರಡು ವರ್ಷಕ್ಕೊಂದರಂತೆ ತಮ್ಮ ತಮ್ಮೊಳಗೇ ಹುದ್ದೆಗಳ ಬದಲಾವಣೆ ಮಾಡಿಕೊಳ್ಳುತ್ತಾರೆ ! ಯಾಕೆ ಗೊತ್ತೇ ? ಕೊಂಕಣಿಯ ಹೆಸರಿನಲ್ಲಿ ಇಲ್ಲಿ ಕೋಟಿ ಕೋಟಿ ರುಪಾಯಿಗಳ ಪ್ರಾಜೆಕ್ಟ್ಗಳಾಗುತ್ತಿವೆ. ಕೊಂಕಣಿಯ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. ಮತ್ತು ಹೀಗೆ ಸಂಗ್ರಹವಾದ ದುಡ್ಡು ಕಾರ್ಯಕ್ರಮಗಳನ್ನು ಮಾಡುವ ಮತ್ತು ಕಟ್ಟಡಗಳನ್ನು ಕಟ್ಟುವ ನೆಪದಲ್ಲಿ ತಮ್ಮ ತಮ್ಮೊಳಗೇ ಹಂಚಿಕೊಳ್ಳಲೆಂದು. ನಿಮಗೆ ಸಾಧ್ಯವಿದ್ದರೆ - ಕೊಂಕಣಿ ಹೆಸರಿನಲ್ಲಿ ಸರ್ಕಾರದಿಂದ ಕೆಲ ಸಂಘಟನೆಗಳಿಗೆ ಸಿಗುವ ದುಡ್ಡು, ಮತ್ತು ಸಾರ್ವಜನಿಕರಿಂದ ಸಂಗ್ರಹವಾದ ದುಡ್ಡು ಯಾರ ಖಾತೆಗೆ ಬಿಲ್ ಪಾವತಿ ರೂಪದಲ್ಲಿ ಹೋಗುತ್ತದೆ ಎಂಬುದರ ಕುರಿತು ಮಾಹಿತಿ ಕಲೆಹಾಕಿ ಒಂದು ಅಂಕಣ ಬರೆಯಿರಿ. ಎಂತಹ ವಿಪರ್ಯಾಸ ನೋಡಿ ವಸಂತ್ - ಕೊಂಕಣಿ ಭಾಷಿಕರು ಬ್ಯಾಂಕಿಂಗ್, ಸಾಫ್ಟ್ವೇರ್, ವೈದ್ಯಕೀಯ ರಂಗಗಳಿಗೆ ಕೊಡುಗೆ ನೀಡಿದ ಕಾಲವೆಲ್ಲಿ ? ಕೊಂಕಣಿ ಹೆಸರಲ್ಲಿ ತಮ್ಮ ಉದ್ದಿಮೆಗಳನ್ನು ನಡೆಸುತ್ತಿರುವ ಕಾಲವೆಲ್ಲಿ ? ಇಲ್ಲದಿದ್ದರೆ ಒಬ್ಬಿಬ್ಬರು ಸೇರಿ ಕೇಸ್ ಹಾಕುವುದಕ್ಕೂ ಲಕ್ಷ ಲಕ್ಷ ರುಪಾಯಿ ಸದಸ್ಯತ್ವ ಶುಲ್ಕದ ಸಂಘೋಟನ್ ಕಟ್ಟುವುದು ಅನಿವಾರ್ಯವೇ ? ಕೇಸ್ ಎನ್ನುವುದು ಸಂಘೋಟನ್ ಕಟ್ಟಲು ಒಂದು ಅಜೆಂಡಾ ಮಾತ್ರವೇ ?
ಇನ್ನೊಂದು ವಿಷಯ - ಇತ್ತೀಚೆಗೆ ಕರ್ನಾಟಕ ಸರಕಾರ ಭಾಷಾ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಿಸಿದೆ. ದಿನಾಂಕ 28 ಫೆಬ್ರುವರಿ 2014 ರ ನೀವು ಅಂಕಣ ಬರೆಯುವ ಪತ್ರಿಕೆಯಲ್ಲಿ ಅಕಾಡೆಮಿಯ ಅಧ್ಯಕ್ಷರುಗಳ ಕಿರು ಪರಿಚಯ ಪ್ರಕಟವಾಗಿದೆ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವಿಚಾರವನ್ನು ನಿಮ್ಮ ವಿವೇಕಕ್ಕೆ ಬಿಡುತ್ತೇನೆ. ಆದರೆ ತುಳು ಅಕಾಡೆಮಿಯ ಆಧ್ಯಕ್ಷರು ಎಷ್ಟು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ, ಬ್ಯಾರಿ ಅಕಾಡೆಮಿಯವರು ಎಷ್ಟು ಕೃತಿಗಳನ್ನು ರಚಿಸಿದ್ದಾರೆ ಎಂಬ ವಿವರಗಳನ್ನು ಕೊಟ್ಟಿರುವಾಗ ಕೊಂಕಣಿ ಸಾಹಿತ್ಯ ಮತ್ತು ಸಂಗೀತಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು ಪತ್ರಿಕೆಯಲ್ಲಿ ಬರೆಯಲಾದ ಕೊಂಕಣಿ ಅಕಾಡೆಮಿಯ ಅಧ್ಯಕ್ಷರ ಕೃತಿಗಳು ಮತ್ತು ದ್ವನಿಸುರುಳಿಗಳ ಬಗ್ಗೆ ವಿವರಗಳನ್ನು ಕೊಡಲು ನಿಮ್ಮ ಘನಪತ್ರಿಕೆ ಮರೆಯಿತೇ ? ಸಂಗೀತದ ಯಾವ ಪ್ರಕಾರದಲ್ಲಿ ಶಾಸ್ತ್ರೀಯವೋ ? ಪಾಶ್ಚಾತ್ಯವೋ ? ಸಾಹಿತ್ಯದ ಯಾವ ಪ್ರಕಾರದಲ್ಲಿ - ಕತೆ, ಕವಿತೆ , ಕಾದಂಬರಿ, ಪ್ರಬಂದ ಅವರು ಗಣನೀಯ ಸೇವೆ ಸಲ್ಲಿಸಿದ್ದಾರೆ ? ಇದನ್ನು ನಾವು ಕರ್ನಾಟಕದ ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಬಲವಂತದ ಯಾವ ಸ್ನಾನ ಎಂದು ಕರೆಯಬೇಕು ಎಂದು ದಯವಿಟ್ಟು ಹೇಳಿ ವಸಂತ್.
ಪ್ರೀತಿ ಇರಲಿ,
ಎಚ್ಚೆಮ್.